• Shree Marikamba
  • Shree Marikamba
  • Shree Marikamba
  • Shree Marikamba
  • Shree Marikamba
  • Shree Marikamba

BREAKING NEWS

  • ಶೀ ಮಾರಿಕಾಂಬಾ ದೇವಿಯ ರಥಾರೋಹಣ & ರಥೋತ್ಸವ

    20th March,2024

    ಶ್ರೀ ಮಾರಿಕಾಂಬಾ ದೇವಿಯ ರಥಾರೋಹಣ ಮತ್ತು ರಥೋತ್ಸವವು ದಿನಾಂಕ : 20/03/2024 ಬುಧವಾರ ಬೆಳಿಗ್ಗೆ 7-27 ರಿಂದ ಪ್ರಾರಂಭವಾಗಲಿದೆ ಹಾಗೂ ಶ್ರೀ ದೇವಿಯ ಶೋಭಾಯಾತ್ರೆ ಬೆಳಿಗ್ಗೆ 8-59 ರಿಂದ ಪ್ರಾರಂಭವಾಗಲಿದೆ

  • ಶ್ರೀ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ

    19th March,2024

    ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ಸಭಾ ಮಂಟಪದಲ್ಲಿ ದಿನಾಂಕ : 19-03-2024 ಮಂಗಳವಾರದಂದು ರಾತ್ರಿ 11-39 ರಿಂದ 11-45 ರ ವರೆಗೆ ನಡೆಯಲಿದೆ.

ದೇವಾಲಯದ ಇತಿಹಾಸ

ಶ್ರೀ ಮಾರಿಕಾಂಬಾ ದೇವಿಯ ಪ್ರತಿಷ್ಠಾಪನೆ ಪ್ರಥಮತ: ಕ್ರಿ.ಶಕ ೧೬೮೯ ರಲ್ಲಿ ಜರುಗಿತು. ಆಗ ಶಿರಸಿ ಒಂದು ಕುಗ್ರಾಮವಾಗಿತ್ತು. ಇಲ್ಲಿಯ ಒಂದು ಕೆರೆಯಲ್ಲಿ ಸಿಕ್ಕಿತೆಂದು ಹೇಳಲಾಗುವ, ಶ್ರೀ ದೇವಿಯ ಕಟ್ಟಿಗೆಯ ವಿಗ್ರಹವನ್ನು ಸ್ಥಾಪಿಸಲು ಭಕ್ತರು ಆಗ ವಿಜಯನಗರ ಸಾಮ್ರಾಜ್ಯದ ಅಂಗವಾಗಿದ್ದ ಸೋಂದಾ ರಾಜ್ಯದ ಮಹಾಪ್ರಭುಗಳಲ್ಲಿ ವಿನಂತಿಸಿದಾಗ, ಅರಸರಾದ ಶ್ರೀ ಇಮ್ಮಡಿ ಸದಾಶಿವರಾಯರು, ಶಿರಸಿಯಲ್ಲಿ ಗ್ರಾಮದೇವತೆಯಾಗಿ, ಶ್ರೀ ದೇವತೆಯನ್ನು ಪ್ರತಿಷ್ಠೆ ಮಾಡಲು ಅನುಮತಿ ನೀಡಿದರು. ನೂರಾರು ವರ್ಷಗಳವರೆಗೆ ಊರಿನ ಹಿರಿಯರೇ, ಮುಂದಾಳುಗಳಾಗಿ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ಶ್ರೀ ದೇವಸ್ಥಾನದ ಭವ್ಯವಾದ ಚಂದ್ರಶಾಲೆ, ಗರ್ಭಗುಡಿ, ಗೋಪುರ ಮತ್ತು ಮಹಾದ್ವಾರಗಳೆಲ್ಲ ಕ್ರಿ.ಶಕ ೧೮೫೦ ರಿಂದ ೧೮೭೫ ರ ಒಳಗೆ ನಿರ್ಮಾಣವಾದವು. ಕ್ರಿ.ಶಕ ೧೯೫೫ ರಿಂದ ದೇವಸ್ಥಾನದ ಆಡಳಿತವು ೫ ಜನ ಸದಸ್ಯರುಳ್ಳ ಧರ್ಮದರ್ಶಿಗಳ ಮಂಡಳದ ಅಧಿಕಾರಕ್ಕೆ ಒಳಪಟ್ಟಿದೆ. ಉ.ಕ. ಜಿಲ್ಲಾ ನ್ಯಾಯಾಧೀಶರು ಪ್ರತಿ ೫ ವರ್ಷಗಳಿಗೊಮ್ಮೆ ಧರ್ಮದರ್ಶಿಗಳನ್ನು ನಾಮಕರಣ ಮಾಡುತ್ತಾರೆ. ಬಂಗಾಲದ ಕಾಲಿಕಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ಅಂಬಾ ಭವಾನಿಯಂತೆ, ಶಿರಸಿಯ ಶ್ರೀ ಮಾರಿಕಾಂಬೆ ಕರ್ನಾಟಕದ ಅತ್ಯಂತ ಜಾಗೃತ ಶಕ್ತಿ ಪೀಠವೆನಿಸಿದೆ. ಕೇವಲ ಪ್ರಾರ್ಥನೆಯಿಂದ ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುವಲ್ಲಿ ಶ್ರೀ ದೇವಿಯ ಪ್ರಸಿದ್ದಿ ಇದೆ. ಜಯಂತಿ, ನವರಾತ್ರಿ, ಕಾರ್ತಿಕೋತ್ಸವ ಹಾಗೂ ಎರಡು ವರ್ಷಗಳಿಗೊಮ್ಮೆ ಎಂಟು ದಿನಗಳ ವೈಭವ ಪೂರ್ಣ ಜಾತ್ರೆ, ಇವು ಇಲ್ಲಿ ಜರುಗುವ ಪ್ರಸಿದ್ದ ಧಾರ್ಮಿಕ ಉತ್ಸವಗಳು. ಶ್ರೀ ದೇವಿಯಲ್ಲಿ ಮಂಗಳವಾರ, ಶುಕ್ರವಾರ ಬೆಳಿಗ್ಗೆ ೭ ರಿಂದ ರಾತ್ರಿ ೧೦ ಘಂಟೆಯವರೆಗೆ, ಉಳಿದ ದಿನಗಳಲ್ಲಿ ಬೆಳಿಗ್ಗೆ ೭ ರಿಂದ ರಾತ್ರಿ ೯ ಘಂಟೆಯವರೆಗೆ ಸೇವೆಗಳು ನಡೆಯುತ್ತವೆ. ಶ್ರೀ ದೇವಾಲಯವು ಶೈಕ್ಷಣಿಕ - ಸಾಂಸ್ಕೃತಿಕ ಕಾರ್ಯಕ್ರಮಗಳ ಕೇಂದ್ರವೂ ಆಗಿದೆ. ಅದಲ್ಲದೇ ಗ್ರಂಥಾಲಯ - ವಾಚನಾಲಯಗಳಿವೆ.

ದೇವಸ್ಥಾನದಲ್ಲಿನ ಸೌಲಭ್ಯಗಳು

    • ವಾಹನ ನಿಲುಗಡೆ

      ಭಕ್ತರ ವಾಹನಗಳನ್ನು ನಿಲುಗಡೆ ಮಾಡಲು ವಿಶೇಷವಾಗಿ ವಿಶಾಲ ಪ್ರದೇಶವನ್ನು ನಿಗದಿಪಡಿಸಲಾಗಿದೆ. ಭಕ್ತರು ಪಾರ್ಕಿಂಗ್ ಪ್ರದೇಶದ ಕಡೆಗೆ ಮುಂದುವರಿಯಲು ಮತ್ತು ಪ್ರವೇಶ ರಸ್ತೆಯನ್ನು ನಿರ್ಬಂಧಿಸದಂತೆ ವಿನಂತಿಸಲಾಗಿದೆ.

    • ಲಗೇಜ್ ಕೊಠಡಿ

      ಭಕ್ತಾದಿಗಳ ವಸ್ತುಗಳನ್ನು ಸುರಕ್ಷಿತವಾಗಿಡಲು ಲಗೇಜ್ ಕೊಠಡಿಗಳನ್ನು ನಿಗದಿಪಡಿಸಲಾಗಿದೆ

    • ಪಾದರಕ್ಷೆ ಸ್ಟ್ಯಾಂಡ್

      ದೇವಾಲಯದ ಆಡಳಿತ ಕಚೇರಿಯ ಬಲಭಾಗದಲ್ಲಿ ಲಭ್ಯವಿರುವ ಪಾದರಕ್ಷೆಗಳ ಸ್ಟ್ಯಾಂಡ್‌ನಲ್ಲಿ ಭಕ್ತರು ತಮ್ಮ ಪಾದರಕ್ಷೆಗಳನ್ನು ಇಟ್ಟುಕೊಳ್ಳಬೇಕೆಂದು ಶಿಫಾರಸು ಮಾಡಿದೆ. ದೇವಾಲಯಕ್ಕೆ ಪ್ರವೇಶಿಸುವ ಮೊದಲು ತಮ್ಮ ಪಾದರಕ್ಷೆಗಳನ್ನು ಎಲ್ಲೆಂದರಲ್ಲಿ ಬಿಡುವ ಬದಲು ಈ ಸೌಲಭ್ಯವನ್ನು ಬಳಸಲು ಭಕ್ತರನ್ನು ಕೋರಲಾಗಿದೆ.

    • ಮಾಹಿತಿ ಕೇಂದ್ರ

      ದೇವಾಲಯದಲ್ಲಿ ನಡೆಸುವ ಸೇವಾ / ಪೂಜೆಯ ಬಗ್ಗೆ ಯಾವುದೇ ಮಾಹಿತಿಯನ್ನು “ದೇವಾಲಯ ಮಾಹಿತಿ ಕೇಂದ್ರ” ದಿಂದ ಪಡೆಯಬಹುದು.

    • ಅನ್ನಪ್ರಸಾದ / ಶುದ್ಧೀಕರಿಸಿದ ಕುಡಿಯುವ ನೀರು

      ಭಕ್ತರಿಗೆ ಪ್ರತಿದಿನ ಮಧ್ಯಾಹ್ನ ದೇವಾಲಯದಲ್ಲಿ ಉಚಿತ ಪ್ರಸಾದ ಭೋಜನ ಲಭ್ಯವಿದೆ. ಭಕ್ತಾದಿಗಳ ಅರೋಗ್ಯ ದೃಷ್ಟಿಯಿಂದ ನೀರು ಶುದ್ಧಿಕರಣ ಘಟಕ ನಿರ್ಮಿಸಲಾಗಿದೆ

    • ಸಿಸಿಟಿವಿ / ಮೆಟಲ್ ಡಿಟೆಕ್ಟರ್ಸ್

      ಭದ್ರತಾ ಉದ್ದೇಶಕ್ಕಾಗಿ ದೇವಾಲಯದ ವಿವಿಧ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು / ಮೆಟಲ್ ಡಿಟೆಕ್ಟರ್ಸಗಳನ್ನು ಅಳವಡಿಸಲಾಗಿದೆ.

    • ಸಾರ್ವಜನಿಕ ಶೌಚಾಲಯ

      ನೈರ್ಮಲ್ಯ ಹಾಗು ಶುಚಿತ್ವದ ಮಹತ್ವವನ್ನು ಸಾರಲು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ

    • ಡ್ರೆಸ್ಸಿಂಗ್ ರೂಮ್ಸ್ / ಸ್ನಾನ ಗೃಹ

      ನೈರ್ಮಲ್ಯ ಹಾಗು ಶುಚಿತ್ವದ ಮಹತ್ವವನ್ನು ಸಾರಲು ಸ್ನಾನ ಗೃಹಗಳನ್ನು ನಿರ್ಮಿಸಲಾಗಿದೆ.

    • ಕಲ್ಯಾಣ ಮಂಟಪ / ಸಭಾಭವನ

      ದೇವಸ್ಥಾನದ ಆವರಣದಲ್ಲಿ ವಿಶಾಲವಾದ ಕಲ್ಯಾಣಮಂಟಪ ಹಾಗು ಸಭಾಭವನ ನಿರ್ಮಿಸಲಾಗಿದೆ .

ಇತ್ತೀಚಿನ ವಿಡಿಯೋಗಳು

......

......

......

......